Monday, January 16, 2012

ನಮ್ಮ ದೇಶ ನಮ್ಮ ಜನ............


 ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು, ಆ ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು............... ಎಂಬುದಾಗಿ ಹಾಡಿದ ಯೋಧ ಸನ್ಯಾಸಿ ಸ್ವಾಮಿ ವಿವೇಕಾನಂದರು.... ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಯುವಜನತೆಗೆ ಕರೆ ನೀಡಿದರು. ಜನ ಸೇವೆಯೇ ಜನಾರ್ಧನನ ಸೇವೆ ಅಂದುಕೊಂಡಿದ್ದ ಅವರು ದರಿದ್ರ ನಾರಾಯಣೋ ಭವಃ ಎಂದರು. ಸತ್ಯ ಶಕ್ತಿಯನ್ನು ಹೆಚ್ಚಿಸಬೇಕು, ಬೆಳಕನ್ನು ತರಬೇಕು, ಹೊಸ ಚೇತನವನ್ನು ತುಂಬಬೇಕು, ನಮ್ಮಲ್ಲಿ ನಮಗೆ ನಂಬಿಕೆ ಇರಬೇಕು, ನಾವು ದೇವರ ಮಕ್ಕಳು, ಜೀವನದಲ್ಲಿ ಬರುವ ಸೋಲುಗಳನ್ನು ಲೆಕ್ಕಿಸಬಾರದು. ಸೋಲುಗಳು ಸಹಜ. ಅವೇ ಜೀಅನದ ಸೊಬಗು, ಹೋರಾಟಗಳು ಸೋಲುಗಳು ಇಲ್ಲದೆ ಇರುತ್ತಿದ್ದರೆ ಜೀವನದಲ್ಲಿ ಮಾಧುರ್ಯವೇ ಇರುತ್ತಿರಲಿಲ್ಲ, ಹಾಗಾಗಿ ಸಣ್ಣ ಸೋಲುಗಳನ್ನು ಲೆಕ್ಕಿಸದೆ, ಸಾವಿರ ಸಲ ಸೋತರೂ ಮರಳಿ ಯತ್ನ ಮಾಡಬೇಕು,  ಎಂಬಿತ್ಯಾದಿ ಮಾತುಗಳಿಂದ ಯುವಜನರನ್ನು ಹುರಿದುಂಬಿಸಿ ಸದಾ ಎಚ್ಚರಿಸಿ ದಾರಿ ತೋರಿದವರು ಸ್ವಾಮಿ ವಿವೇಕಾನಂದರು.
 ಇಂತಹ ಪುಣ್ಯ ಪುರುಷರು ಭರತ ಮಾತೆಯ ಒಡಲಲ್ಲಿ ಜನಿಸಿ ಮತೃಭೂಮಿಯ ಕೀರ್ತಿಯನ್ನು ಬಾನೆತ್ತರಕ್ಕೆ ಏರುಸುವುದಲ್ಲದೆ, ವಿಶ್ವದೆಲ್ಲೆಡೆಗೆ ಪಸರಿಸಿದ್ದಾರೆ...
        ನಮ್ಮ ಯುವಜನತೆಯ ಶಕ್ತಿ ನಿಜಕ್ಕೂ ಸಮುದ್ರದ ಅಲೆಗಳಷ್ಟು ಬಲಿಷ್ಠ, ಆನೆಯಷ್ಟು ಬಲದಂತಹ ಬಲ, ಒಂದಾಗಿ ಉತ್ತಮ ಮಾರ್ಗದಲ್ಲಿ ಎಲ್ಲರೂ ಬೆರೆತು ದುಡಿದರೆ ಭರತ ಮಾತೆಯ ಸಿರಿವಂತಿಕೆಯಲ್ಲಿ ಕೊರತೆಯೇನಿದೆ? ಸಂಸ್ಕೃತಿಯಲ್ಲೋ, ಕಲೆಯಲ್ಲೋ, ಆರ್ಥಿಕತೆಯಲ್ಲೋ, ವೈಜ್ಞಾನಿಕತೆಯಲ್ಲೋ,.........................? ಖಂಡಿತವಾಗಿಯೂ ಇಲ್ಲ..... ಒಕ್ಕೊರಲಿನಿನ್ದ ಮೊಳಗಿದ ಧ್ವನಿ ಎಂಟು ದಿಕ್ಕುಗಳಲ್ಲೂ ಮರ್ಧನಿಸಲು ಸಾಧ್ಯ....... ಹಾಗೆಯೆ ಹಲವು ಬಲಿಷ್ಟ  ಕೈಗಳಿಂದ ಮಾತ್ರ ಬಲಿಷ್ಟ ರಾಷ್ಟ್ರದ ನಿರ್ಮಾಣ ಸಾಧ್ಯವಲ್ಲವೇ? ಹಾಗಾಗಿ, ಒಕ್ಕೊರಲಿನಿಂದ....... ಮೊಳಗಲಿ ಜಯ ಘೋಷ............. ಭಾರತಾಂಬೆಗೆ ಜೈ..................

No comments:

Post a Comment